Wed, May 7, 2025
ಕಾರ್ಕಳ ಜೈನ್ ಮಿಲನ್ ಮಾಸಿಕ ಸಭೆ
ದಿನಾಂಕ 23/3/2025 ಆದಿತ್ಯವಾರದಂದು ನಡೆದ ಕಾರ್ಕಳ ಜೈನ್ ಮಿಲನ್ ಮಾಸಿಕ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ, ಅಂತಾರಾಷ್ಟ್ರೀಯ ಮಟ್ಟದ ಜಿನ ಧರ್ಮ ಪ್ರಚಾರಕರಾದ ನಿರಂಜನ ಜೈನ್, ಕುದ್ಯಾಡಿಯವರನ್ನು ಮತ್ತು ಮಹಾಕವಿ ರತ್ನಾಕರವರ್ಣಿ ಪ್ರಶಸ್ತಿ ಪುರಸ್ಕೃತರಾದ ನೇರೆಂಕಿ ಪಾರ್ಶ್ವನಾಥ್ ಜೈನ್ ರವರನ್ನು,ಅವರ ನಿಸ್ವಾರ್ಥ ಸೇವೆಗಾಗಿ ಕಾರ್ಕಳದ ಸಮಸ್ತ ಜೈನ ಬಾಂಧವರ ಪರವಾಗಿ ಅತ್ಯಂತ ಪ್ರೀತಿ, ಗೌರವಗಳಿಂದ ಸನ್ಮಾನ ಪತ್ರವನ್ನಿತ್ತು ಗೌರವಿಸಲಾಯಿತು.