Wed, Apr 30, 2025
ಮಂಚೇನಹಳ್ಳಿ: ಧಾರ್ಮಿಕ ಶಿಬಿರ
ಮಂಚೇನಹಳ್ಳಿ: ಶ್ರೀ ಭಗವಾನ್ ಬಾಹುಬಲಿ ಟ್ರಸ್ಟ್, ಶ್ರೀ ಕೋಡಿಬ್ರಹ್ಮದೇವರ ಧರ್ಮಸಂಸ್ಥೆಯ ವತಿಯಿಂದ ಇದೇ ಏಪ್ರಿಲ್ 15ರಿಂದ 19ರವರೆಗೆ ಮಕ್ಕಳಿಗೆ ಮತ್ತು ಯುವಕರಿಗೆ ಧಾರ್ಮಿಕ ಶಿಬಿರವನ್ನು ಏರ್ಪಡಿಸಲಾಗಿದೆ. ಐದೂ ದಿನಗಳು ಊಟ ಮತ್ತು ವಸತಿಯ ವ್ಯವಸ್ಥೆ ಮಾಡಲಾಗಿದೆ. ಭಾಗವಹಿಸಲು ಇಚ್ಛಿಸುವವರು ಕೆಳಗಿನ ದೂರವಾಣಿ ಸಂಖ್ಯೆಯಲ್ಲಿ ಹೆಸರನ್ನು ನೀಡಿ ನೊಂದಾಯಿಸಿಕೊಳ್ಳತಕ್ಕದ್ದು. ಉಳಿದುಕೊಳ್ಳುವ ವ್ಯವಸ್ಥೆ ಸೀಮಿತವಾಗಿರುವುದರಿಂದ ಮೊದಲು ಕರೆ ಮಾಡಿದವರಿಗೆ ಆದ್ಯತೆ ನೀಡಲಾಗುವುದು. ದೂರವಾಣಿ ಸಂಖ್ಯೆ : ತ್ರಿಶಲಾ ಬ್ರಹ್ಮಯ್ಯ-94484 57738, ವಿ.ಜೆ. ಬ್ರಹ್ಮಯ್ಯ-94480 74801, ಕೆ.ಬಿ. ಅಶೋಕ್ ಕುಮಾರ್-95136 29196, ಪಿ.ಸಿ. ರಾಜೇಶ್-98454 84399, ವಿ.ಎಸ್. ಬ್ರಹ್ಮಪ್ರಕಾಶ್-98450 31482, ಎಂ.ಎಸ್. ದೇವರಾಜ್-92422 78089