ವಾರ್ಷಿಕ ವರ್ಧಂತಿ ಪೂಜಾ ಮಹೋತ್ಸವ
Published Date: 17-Mar-2025 Link-Copied
ಉಳ್ಳಾಲ ಭಗವಾನ್ ಆದಿನಾಥ ಸ್ವಾಮಿ, ಭಗವಾನ್ ಪಾರ್ಶ್ವನಾಥ ಸ್ವಾಮಿ, ಮಾತೆ ಪದ್ಮಾವತೀ ದೇವಿ ಬಸದಿಯ ಪಂಚಕಲ್ಯಾಣ ಮಹೋತ್ಸವದ ವಾರ್ಷಿಕ ವರ್ಧಂತಿ ಪೂಜಾ ಮಹೋತ್ಸವವು ಮೂಡುಬಿದಿರೆ ಶ್ರೀ ಜೈನ ಮಠದ ಪ. ಪೂ. ಸ್ವಸ್ತಿಶೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನ ಹಾಗೂ ಪಾವನ ಸಾನ್ನಿಧ್ಯದೊಂದಿಗೆ ದಿನಾಂಕ 23-03-2025ನೇ ಆದಿತ್ಯವಾರ ಜರಗಲಿದೆ. ಪೂಜಾ ಕಾರ್ಯಕ್ರಮ ಮೂಲಸ್ವಾಮಿಗೆ ೨೪ ಕಲಶ ಅಭಿಷೇಕ, ಮಾತೆ ಶ್ರೀ ಪದ್ಮಾವತಿ ದೇವಿಗೆ ಲಕ್ಷ ಹೂವಿನ ಮಹಾಪೂಜೆ, ಶ್ರೀ ಕ್ಷೇತ್ರಪಾಲನಿಗೆ ಕ್ಷೀರಾಭಿಷೇಕ, ಶ್ರೀ ನಾಗಬ್ರಹ್ಮ ಸಾನ್ನಿಧ್ಯ ಪೂಜಾ ಸೇವೆ.