ವೇಣೂರು: ಮುನಿಮಹಾರಾಜರ ಪುರಪ್ರವೇಶ
Published Date: 02-Mar-2025 Link-Copied
ಪರಮ ಪೂಜ್ಯ ವಾತ್ಸಲ್ಯಮೂರ್ತಿ ಗಣಾಧರ ಆಚಾರ್ಯ ಶ್ರೀ 108 ಕುಂಥುಸಾಗರ ಮಹಾರಾಜರು ಸತ್ಗಂಗ ಸಮೇತರಾಗಿ ವೇಣೂರು ಶ್ರೀ ಬಾಹುಬಲಿ ಕ್ಷೇತ್ರಕ್ಕೆ ಇಂದು ಬೆಳಿಗ್ಗೆ 8.00ಗಂಟೆಗೆ ಪುರಪ್ರವೇಶ ಗೈದಿರುತ್ತಾರೆ. ಈ ಸಂದರ್ಭದಲ್ಲಿ ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಉಪಾಧ್ಯಕ್ಷರಾದ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲರು, ಕಾರ್ಯದರ್ಶಿಗಳಾದ ವಿ. ಪ್ರವೀಣ್ ಕುಮಾರ್ ಇಂದ್ರ, ಕೋಶಾಧಿಕಾರಿಗಳಾದ ಜಯರಾಜ್ ಕಂಬಳಿ ಮತ್ತು ಸಮಿತಿಯ ಎಲ್ಲಾ ಸದಸ್ಯರು ಹಾಗೂ ಸಮಸ್ತ ಶ್ರಾವಕ-ಶ್ರಾವಕಿಯರು ಪಾಲ್ಗೊಂಡಿದ್ದರು. ಮುನಿಮಹಾರಾಜರುಗಳು ಇಂದು ಸಂಜೆ 4.00ಗಂಟೆಗೆ ವೇಣೂರಿನಿಂದ ಪೆರಿಂಜೆ ಬಸದಿಗೆ ವಿಹಾರ ಹೊರಡಲಿದ್ದಾರೆ.