ಬೆಂಗಳೂರಿನ ಕುಬೇರ ಜೈನ್ ಮಿಲನ್ ನ 180ನೇ ವಾರ್ಷಿಕ ಸಭೆ
Published Date: 02-Mar-2025 Link-Copied
ಇಂದಿನ ಜಾಗತೀಕರಣ ಹಾಗೂ ಉಧಾರಿಕರಣದ ಕಾಲಘಟ್ಟದಲ್ಲಿ ಸಂಸ್ಕೃತಿ, ಸಂಸ್ಕಾರ, ಶಾಂತಿ ಮತ್ತು ಅಹಿಂಸೆಗಳ ಸಂರಕ್ಷಣೆಯ ಹಿನ್ನೆಲೆಯಲ್ಲಿ ಕಾಲಕ್ಕೆ ತಕ್ಕಂತೆ ನಾವು ಬದಲಾವಣೆ ಕಾಣುವುದು ಅಗತ್ಯವಾಗಿದೆ ಎಂದು ಧಾರವಾಡದ ಎಸ್.ಡಿ.ಎಂ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ನಿರಂಜನ್ ಕುಮಾರ್ ತಿಳಿಸಿದರು. ಅವರು ಆಂಧ್ರ ಪ್ರದೇಶದ ಸತ್ಯ ಸಾಯಿ ಜಿಲ್ಲೆ, ಪೆನುಗೊಂಡೇ ಪಟ್ಟಣದ ಶ್ರೀ ಅಜಿತನಾಥ ತೀರ್ಥಂಕರ ಬಸದಿ ಆವರಣದಲ್ಲಿ ನಡೆದ ಬೆಂಗಳೂರಿನ ಕುಬೇರ ಜೈನ್ ಮಿಲನ್ ನ 180ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದರು. ಶ್ರೀ ಧರ್ಮಸ್ಥಳ ಧರ್ಮೊತ್ತನ ಟ್ರಸ್ಟ ನಿಂದ ಶ್ರೀ ಅಜಿತನಾಥ ಬಸದಿ ಜೀರ್ಣೋದ್ಧಾರಗೊoಡು ಹೊಸ ರೂಪ ಕಂಡಿದೆ, ಜೈನ ಧರ್ಮ ಚಿಕ್ಕ ಧರ್ಮವಾದರೂ ಸುರಕ್ಷಿತ ಹಾಗೂ ವಿಶಿಷ್ಟ ಧರ್ಮವಾಗಿದೆ, ನಮ್ಮ ಧರ್ಮ ಶ್ರಮಣ ಪರಂಪರೆ ಹೊಂದಿದೆ, ಇತ್ತೀಚಿನ ದಿನಗಳಲ್ಲಿ ವಿಶ್ವದಲ್ಲಿ ಅಶಾಂತಿ, ಹಿಂಸೆ, ರಕ್ತಪಾತ, ತಾಂಡವ ಮಾಡುತ್ತಿದ್ದು ಯುದ್ಧದ ಕಾರ್ಮೋಡ ಕವಿದಿದೆ. ಬದಲಾವಣೆ ಇಂದು ಅಗತ್ಯವಾಗಿದ್ದು ಇವಕ್ಕೆಲ್ಲ ಶಾಂತಿ ಮತ್ತು ಅಹಿಂಸೆಗೆ ಪೂರಕವಾಗಿರುವ ಜೈನ ಧರ್ಮದ ಸಿದ್ಧಾಂತಗಳು ಅಗತ್ಯ ಎಂದರು. ಯಾವುದೇ ಕಾರ್ಯಕ್ಕೆ ನಾವು ಹೊಂದಿಕೊಳ್ಳುವ ಭಾವನೆ, ಭೂಮಿಯ ಮೇಲೆ ಬದುಕುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು. ಡಾ ಪದ್ಮಲತ ನಿರಂಜನ್ ಮಾತನಾಡಿ ಎಲ್ಲರಿಗೂ ಪ್ರೀತಿಸುವ ಶಕ್ತಿ ನೀಡಲಿ ಎಂದು ಹಾರೈಸಿ ಭಕ್ತಿಗೀತೆ ಹಾಡಿದರು. ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಮಾಜಿ ಅಧ್ಯಕ್ಷೇ ಪದ್ಮಿನಿ ಪದ್ಮರಾಜ್ ಮಾತನಾಡಿ ಭಾರತೀಯ ಜೈನ ಮಿಲನ್ ಹಾಗೂ ಜೈನ ಮಹಿಳಾ ಒಕ್ಕೂಟಗಳು ಧರ್ಮಸ್ಥಳದ ಧರ್ಮಕಾರ್ಯಗಳು ಪ್ರಶಂಸನಿಯ, ಧರ್ಮ ಸಂಸ್ಕಾರ ಕಾರ್ಯಗಳನ್ನು ಅಳವಡಿಸಿಕೊಳ್ಳುವಂತೆ ಸಮಾಜ ಬಂದುಗಳಿಗೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಉದ್ಯಮಿ ಹಾಗೂ ಅಮರಾಪುರ ಜೈನ ಸಮಾಜದ ಅಧ್ಯಕ್ಷ ಪದ್ಮರಾಜ್, ತ್ಯಾಗಿ ಸೇವಾ ಸಮಿತಿಯ ಅಧ್ಯಕ್ಷ ಕೆ. ಜೆ. ಎ. ಮಂಜುನಾಥ್ ಯುವರಾಜ್, ನಾಗಕುಮಾರ್ ಸಂಜು, ಮಂಜು, ಅಮರಾಪುರ ಚಂದ್ರಿಕೀರ್ತಿ, ಅಮರಾಪುರ ಅನಿಲ್, ಬೆಂಗಳೂರಿನ ಕುಬೇರ ಜೈನ್ ಮಿಲನ್ ಅಧ್ಯಕ್ಷರು, ಪದಾಧಿಕಾರಿಗಳು, ಅಮರಾಪುರ, ಪೆನಗೊಂಡೆ, ಜೈನ್ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಜೈನ ಸಮಾಜದ ಮುಖಂಡರುಗಳು, ವಿವಿಧ ಮಹಿಳಾ ಸಮಾಜದ ಮುಖಂಡರುಗಳು ಭಾಗವಹಿಸಿದ್ದರು. ಇಸ್ರೋ ಅಜಿತ್ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಪುರೋಹಿತ್ ಕೋಮಲ್ ಕುಮಾರ್ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಜೆ ರಂಗನಾಥ- ತುಮಕೂರು