ಪಂಡಿತ್ ಬಾಹುಬಲಿ ಉಪಾಧ್ಯರವರಿಗೆ ಪದವಿ ಪ್ರದಾನ
Published Date: 24-Feb-2025 Link-Copied
ಜಮಖಂಡಿಯ ೧೦೦೮ ಶ್ರೀ ಪಾರ್ಶ್ವನಾಥ ದಿಗಂಬರ ಜೈನ್ ಮಂದಿರದ ಅರ್ಚಕರಾದ ಪಂಡಿತ್ ಬಾಹುಬಲಿ ಉಪಾಧ್ಯರವರಿಗೆ ಜಿಂಜರ್ ವಾಡ ಗ್ರಾಮದಲ್ಲಿ ಇತ್ತೀಚೆಗೆ ನಡೆದಿರುವ ಪಂಚಕಲ್ಯಾಣ ಪ್ರತಿಷ್ಠ ಮಹಾಮಹೋತ್ಸವದಲ್ಲಿ “ಸಾಧನ ರತ್ನ” ಪ್ರಶಸ್ತಿಯನ್ನು ಹಾಗೂ ಜೈನ್ ಇಂಡಿಯನ್ ಟಿ.ವಿ ವತಿಯಿಂದ “ಕರ್ನಾಟಕ ಪುರೋಹಿತ ರತ್ನ” ಎಂಬ ಪದವಿಯನ್ನು ನೀಡಿ ಗೌರವಿಸಲಾಗಿದೆ. ಇವರಿಗೆ ಅನೇಕ ಪ್ರಶಸ್ತಿಗಳು ಲಭಿಸಿವೆ: ಪ್ರತಿಷ್ಠ ರತ್ನ, ಪ್ರತಿಷ್ಠ ಶಿರೋಮಣಿ, ಪ್ರತಿಷ್ಠ ಬಾಸ್ಕರ, ಪ್ರತಿಷ್ಠ ಪ್ರವೀಣ, ಪಂಡಿತರತ್ನ, ವಾಣಿಭೂಷಣ, ಪ್ರತಿಷ್ಠಾಚಾರ್ಯ.