ಸತ್ತೂರು-ಧಾರವಾಡ ಜ.30: ವಿಶ್ವ ಕುಷ್ಠರೋಗ ದಿನ


Logo

Published Date: 31-Jan-2024 Link-Copied

ಸತ್ತೂರು/ಧಾರವಾಡ: ಇಲ್ಲಿಯ ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಚರ್ಮರೋಗ ವಿಭಾಗದಲ್ಲಿ ವಿಶ್ವ ಕುಷ್ಠರೋಗ ದಿನವನ್ನು ಜನವರಿ 30ರಂದು ಆಚರಿಸಲಾಯಿತು. “ಕುಷ್ಠರೋಗವನ್ನು ಸೋಲಿಸಿ” ಎಂಬ ಧ್ಯೇಯೆಯೊಂದಿಗೆ ಭಿತ್ತಿಪತ್ರ ಪ್ರದರ್ಶನ ಸ್ಪರ್ಧೆ ಏರ್ಪಡಿಸುವ ಮೂಲಕ ಜನರಲ್ಲಿ ರೋಗದ ಕುರಿತು ಜಾಗೃತಿ ಮೂಡಿಸಿದರು. ಈ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ರತ್ನಮಾಲಾ ದೇಸಾಯಿ, ವೈದ್ಯಕೀಯ ಉಪ ಅಧೀಕ್ಷಕರಾದ ಡಾ. ಮಖ್ದೂಮ ಕಿಲ್ಲೆದಾರ, ಚರ್ಮರೋಗ ವಿಭಾಗದ ಮುಖ್ಯಸ್ಥರಾದ ಡಾ. ನವೀನ ಕೆ. ಎನ್., ಡಾ. ಎಸ್.ಬಿ. ಅಥಣಿಕರ ಮತ್ತಿತರರು ಉಪಸ್ಥಿತರಿದ್ದರು. ಕುಷ್ಠರೋಗ ಕಳಂಕದ ನಿರ್ಮೂಲನೆ, ಆರಂಭಿಕ ಹಂತದಲ್ಲೆ ಪತ್ತೆ ಹಚ್ಚುವುದು ಮತ್ತು ಸಮುದಾಯ ಜಾಗೃತಿಯನ್ನು ಕೇಂದ್ರಿಕರಿಸುತ್ತಾ ಕುಷ್ಠರೋಗ ಪೀಡಿತ ವ್ಯಕ್ತಿಗಳ ತಾರತಮ್ಯವನ್ನು ತೊಡೆದುಹಾಕಲು ಎಲ್ಲಾ ಸದಸ್ಯರಿಂದ ಪ್ರತಿಜ್ಞೆ ಮಾಡಲಾಯಿತು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img