Article Image

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ 22ನೇ ಶಾಖೆ ಪುರುಷರಕಟ್ಟೆಯಲ್ಲಿ ಶುಭಾರಂಭ

Article Image

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ 22ನೇ ಶಾಖೆ ಪುರುಷರಕಟ್ಟೆಯಲ್ಲಿ ಶುಭಾರಂಭ

ಪುತ್ತೂರು: ‘ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ' ಹಾಗೂ ರಾಜ್ಯ ಮಟ್ಟದ ‘ಉತ್ತಮ ಸಹಕಾರ ಸಂಘ ಪ್ರಶಸ್ತಿ' ಪುರಸ್ಕೃತಗೊಂಡ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘವು ಬೆಳ್ತಂಗಡಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು, 22ನೇ ಶಾಖೆಯು ಜ. 28ರಂದು ನರಿಮೊಗರು ಗ್ರಾಮದ ಪುರುಷರಕಟ್ಟೆ ಸಿದ್ದಣ್ಣ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು. ಕಾರ್ಯಕ್ರಮವನ್ನು ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಉದ್ಘಾಟಿಸಿ ಮಾತನಾಡುತ್ತಾ, ಗುರುದೇವ ವಿವಿಧೋದ್ದೇಶ ಸಹಕಾರ ಸಂಘವು ಅತೀ ಕಡಿಮೆ ಅವಧಿಯಲ್ಲಿ ರೂ. 1000 ಕೋಟಿ ವ್ಯವಹಾರ ನಡೆಸುವ ಗಣನೀಯ ಸಾಧನೆ ಮಾಡಿದೆ. ಬ್ಯಾಂಕ್ ಮುನ್ನಡೆಯಲು ಠೇವಣಿಗಾರರಗಿಂತ ಸಾಲಗಾರರೇ ಮುಖ್ಯ. ನೀಡಿದ ಸಾಲ ಮರುಪಾವತಿಸುವಲ್ಲಿ ಸಿಬ್ಬಂದಿಗಳ ಕಾರ್ಯದಕ್ಷತೆ, ಕ್ರಿಯಾಶೀಲತೆ ಪ್ರಮುಖವಾಗಿದೆ. ಈ ಸಂಘವು ಅಂತರಾಜ್ಯ ಸಂಸ್ಥೆಯಾಗಿ ಬೆಳೆಯಲಿ. ಪುತ್ತೂರಿನಲ್ಲಿ ಈಗಾಗಲೇ ಎರಡು ಶಾಖೆ ಪ್ರಾರಂಭವಾಗಿದ್ದು ಇನ್ನೂ 8 ಶಾಖೆಗಳು ಪ್ರಾರಂಭವಾಗಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎನ್. ಪದ್ಮನಾಭ ಮಾಣಿಂಜ ಮಾತನಾಡುತ್ತಾ, ನಮ್ಮ ಶಾಖೆಯ ಮುಖಾಂತರ ಗ್ರಾಹಕರಿಗೆ ಪ್ರಾಮಾಣಿಕ, ಪಾರದರ್ಶಕ ಹಾಗೂ ಭ್ರಷ್ಟಾಚಾರ ರಹಿತ ಆಡಳಿತವನ್ನು ಸಿಬಂದಿಗಳ ಮೂಲಕ ನೀಡಲಾಗುವುದು ಎಂದು ಹೇಳಿದರು. ಕ್ರೀಡಾ ಕ್ಷೇತ್ರದ ಸಾಧಕರಾದ ದೀಕ್ಷಾ ಹಾಗೂ ಭವಿತ್ರವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಶಾಖೆಗೆ ಸ್ಥಳಾವಕಾಶ ನೀಡಿದ ಸಿದ್ದಣ್ಣ ಪ್ರಭು ಕಟ್ಟಡದ ಮಾಲಕ ನವೀನ್ ಪ್ರಭುರವರನ್ನು ಕಾರ್ಯಕ್ರಮದಲ್ಲಿ ಸನ್ಮಾಸಲಾಯಿತು. ಕಾರ್ಯಕ್ರಮದಲ್ಲಿ ಭದ್ರತಾ ಕೋಶ ಉದ್ಘಾಟಿಸಿದ ನರಿಮೊಗರು ಗ್ರಾ.ಪಂ. ಅಧ್ಯಕ್ಷೆ ಹರಿಣಿ ನಿತ್ಯಾನಂದ, ಗಣಕಯಂತ್ರ ವಿಭಾಗವನ್ನು ಉದ್ಘಾಟಿಸಿದ ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನವೀನ್ ಡಿ., ನಿರಖು ಠೇವಣಿ ಪ್ರಮಾಣ ಪತ್ರ ವಿತರಿಸಿದ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಗಳ ಸಂಚಾಲಕ ಭಾಸ್ಕರ ಆಚಾರ್ ಹಿಂದಾರ್, ಸಂಪ್ಯ ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲು, ಸಂಘದ ವಿಶೇಷಾಧಿಕಾರಿ ಯಂ. ಮೋನಪ್ಪ ಪೂಜಾರಿ ಕಂಡೆತ್ಯಾರುರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೌರಿ ಹೊನ್ನಪ್ಪ ಶಾಂತಿಗೋಡು ಪ್ರಾರ್ಥಿಸಿ, ಸಂಘದ ಉಪಾಧ್ಯಕ್ಷ ಭಗೀರಥ ಜಿ. ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ಥ ಕುಮಾರ್ ಹಾಗೂ ಕಡಬ ಶಾಖೆಯ ಸ್ವಾತಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಆನಂದ ಪೂಜಾರಿ ಸರ್ವೆದೋಳ ವಂದಿಸಿದರು.

ಕಲ್ಲೇಗ: ಕಲ್ಕುಡ ದೈವದ ವಾರ್ಷಿಕ ಜಾತ್ರೋತ್ಸವ

Article Image

ಕಲ್ಲೇಗ: ಕಲ್ಕುಡ ದೈವದ ವಾರ್ಷಿಕ ಜಾತ್ರೋತ್ಸವ

ಪುತ್ತೂರು ಕಲ್ಲೇಗದಲ್ಲಿ ವರ್ಷಂಪ್ರತಿ ನಡೆಯುವ ಶ್ರೀ ಕಲ್ಕುಡ ದೈವದ ವಾರ್ಷಿಕ ಜಾತ್ರೋತ್ಸವವು ಜನವರಿ 24ರಂದು ಜರಗಲಿರುವುದು. ಬೆಳಗ್ಗೆ ಗಂಟೆ 9ಕ್ಕೆ ಕಾರ್ಜಾಲು ಗುತ್ತುವಿನಲ್ಲಿ ಸ್ಥಳ ಶುದ್ಧಿ ಹೋಮ ಮತ್ತು ಕಲಶ ಪ್ರತಿಷ್ಠೆ, ಬೆಳಗ್ಗೆ 11.30ಕ್ಕೆ ಶ್ರೀ ದೈವಸ್ಥಾನದಲ್ಲಿ ಗಣಹೋಮ ಮತ್ತು ಶ್ರೀ ದೈವಗಳ ತಂಬಿಲ ಮತ್ತು ನಾಗತಂಬಿಲ, ರಾತ್ರಿ ಗಂಟೆ 7.30ಕ್ಕೆ ಸರಿಯಾಗಿ ಶ್ರೀ ದೈವಗಳ ಮೂಲಸೆಳೆ ಕಾರ್ಜಾಲು ಗುತ್ತಿನಿಂದ ಭಂಡಾರ ಹೊರಟು ರಾತ್ರಿ 9.30ಕ್ಕೆ ಕಲ್ಕುಡ ದೈವದ ನೇಮೋತ್ಸವ ನಡೆಯಲಿದೆ.

ಮಿಜಾರು, ಎಡಪದವು : ಶ್ರೀ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ ಬ್ರಹ್ಮ ಬೈದರ್ಕಳ ಗರಡಿಯ ವರ್ಷಾವಧಿ ನೇಮೋತ್ಸವ

Article Image

ಮಿಜಾರು, ಎಡಪದವು : ಶ್ರೀ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ ಬ್ರಹ್ಮ ಬೈದರ್ಕಳ ಗರಡಿಯ ವರ್ಷಾವಧಿ ನೇಮೋತ್ಸವ

ಮಂಗಳೂರು ತಾಲೂಕಿನ ಮಿಜಾರು, ಎಡಪದವು ಶ್ರೀ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ ಬ್ರಹ್ಮ ಬೈದರ್ಕಳ ಗರಡಿಯ ವರ್ಷಾವಧಿ ನೇಮೋತ್ಸವವು ಇಂದಿನಿಂದ (ಜ. 23) ಪ್ರಾರಂಭಗೊಂಡು ಜನವರಿ 28ರ ವರೆಗೆ ನಡೆಯಲಿದೆ. 24ರಂದು ಎಡಪದವು ಗುತ್ತಿನಿಂದ ಭಂಡಾರ ಹೊರಟು 25ರಂದು ರಾತ್ರಿ ದೈವ ನೇಮ ಮತ್ತು 26ರಂದು ರಾತ್ರಿ ಶ್ರೀ ಕೊಡಮಣಿತ್ತಾಯ-ಕುಕ್ಕಿನಂತಾಯ ದೈವಗಳ ನೇಮೋತ್ಸವವು ನಡೆಯಲಿದೆ. 27ರಂದು ಸಂಜೆ 6:30ಕ್ಕೆ ಶ್ರೀ ಬ್ರಹ್ಮಬೈದರ್ಕಳ ನೇಮ ಮತ್ತು ರಾತ್ರಿ 2 ಗಂಟೆಗೆ ಮಾಣಿಬಾಲೆ ನೇಮೋತ್ಸವವು ನಡೆಯಲಿದೆ ಎಂದು ಆಡಳಿತ ಮೊಕ್ತೇಸರರಾದ ಕೆ. ಸನತ್ ಕುಮಾರ್ ಪಡಿವಾಳ್‌ರವರು ತಿಳಿಸಿರುತ್ತಾರೆ.

ಜ. 22-30 : ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ

Article Image

ಜ. 22-30 : ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ

ಬೆಳ್ತಂಗಡಿ ತಾಲೂಕಿನ ನ್ಯಾಯತರ್ಪು ಗ್ರಾಮದ ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ ಮತ್ತು ನೂತನ ಚಂದ್ರಮಂಡಲ ರಥ ಮತ್ತು ಪಲ್ಲಕ್ಕಿ ಸಮರ್ಪಣೆಯು ಜನವರಿ 22ರಿಂದ ಪ್ರಾರಂಭಗೊಂಡು 30ರವರೆಗೆ ನಡೆಯಲಿದೆ. ಸುಮಾರು 800 ವರ್ಷಗಳ ಇತಿಹಾಸವಿರುವ ಪ್ರಸಿದ್ಧ ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನವು ಬೆಳ್ತಂಗಡಿ ತಾಲೂಕಿನ ನ್ಯಾಯತರ್ಪು ಗ್ರಾಮದಲ್ಲಿದೆ. ವ್ಯಾಜ್ಯಗಳನ್ನು ಪರಿಹರಿಸಿ, "ತೀರ್ಪು" ನೀಡುವ ಸ್ಥಳವೆಂದೇ ಪ್ರತೀತಿ ಪಡೆದು ಮುಂದಕ್ಕೆ "ನ್ಯಾಯತೀರ್ಪು-ನ್ಯಾಯತರ್ಪು" ಎಂದಾಯಿತೆಂದು ಇಲ್ಲಿನ ಇತಿಹಾಸ. ನ್ಯಾಯತರ್ಪು, ಕಳಿಯ ಮತ್ತು ಓಡಿಲ್ನಾಳ ಗ್ರಾಮಗಳಲ್ಲದೆ ಹತ್ತಿರದ ಕಣಿಯೂರು, ಕೊಯ್ಯೂರು, ಕುವೆಟ್ಟು ಮತ್ತು ಮಚ್ಚಿನ ಗ್ರಾಮದ ಆಸುಪಾಸಿಗೂ ಶ್ರೀ ಕ್ಷೇತ್ರದ ವ್ಯಾಪ್ತಿ ಹಬ್ಬಿದೆ. ಊರ-ಪರವೂರಿನ ಭಕ್ತವೃಂದದ ಪರಿಶ್ರಮದಿಂದ ಶ್ರೀ ಕ್ಷೇತ್ರವು ಜೀರ್ಣೋದ್ಧಾರಗೊಂಡು, 2002ರಲ್ಲಿ ಪುನಃಪ್ರತಿಷ್ಠಾ-ಅಷ್ಟಬಂಧ ಬ್ರಹ್ಮಕಲಶದೊಂದಿಗೆ ನವೀಕರಣಗೊಂಡಿದೆ. ಕ್ಷೇತ್ರದ ಅಭಿವೃದ್ಧಿ ಮುಂದಿನ ಹಂತವಾಗಿ ಕ್ಷೇತ್ರದ ದೈವಗಳಾದ ಕೊಡಮಣಿತ್ತಾಯ ಹಾಗೂ ಪಿಲಿಚಾಮುಂಡಿ ದೈವಗಳಿಗೆ ಮಾಡ್ಯಾರುಗುಡ್ಡೆಯಲ್ಲಿ ದೈವಸ್ಥಾನ ನಿರ್ಮಿಸಿ ಪ್ರತಿಷ್ಠೆ ಮಾಡಲಾಗಿದೆ. 2010ರಲ್ಲಿ ಕ್ಷೇತ್ರದ ಇತಿಹಾಸದಲ್ಲೇ ಸುವರ್ಣಾಕ್ಷರದಲ್ಲಿ ಬರೆದಿಡುವಂತೆ ದಾಖಲೆ ಅವಧಿಯಲ್ಲಿ ನೂತನ ರಥ ಸಮರ್ಪಣೆ ಹಾಗೂ ಧ್ವಜಸ್ತಂಭದ ಪ್ರತಿಷ್ಠೆ ನಡೆದಿದೆ. ಈ ಎಲ್ಲ ಕಾರ್ಯಗಳಿಂದ ನಾಳ ಕ್ಷೇತ್ರವು ಅಭಿವೃದ್ಧಿ ಹೊಂದಿ, ಕ್ಷೇತ್ರದ ಸಾನ್ನಿಧ್ಯವು ವೃದ್ಧಿಯಾಗಿ ಹೆಚ್ಚಿನ ಭಕ್ತವೃಂದವನ್ನು ತನ್ನತ್ತ ಸೆಳೆಯುತ್ತಿದೆ. ಜ. 26ರಂದು ಸಂಜೆ 7 ಗಂಟೆಗೆ ಚಂದ್ರಮಂಡಲ ಉತ್ಸವ, 27ರಂದು ಬೆಳಗ್ಗೆ 9 ಗಂಟೆಗೆ ದೇವರ ದರ್ಶನ ಬಲಿ, ರಾತ್ರಿ 8 ಗಂಟೆಗೆ ದೇವರ ಉತ್ಸವ ಬಲಿ ಹೊರಟು, ಕೊಡಮಣಿತ್ತಾಯ ದೈವದ ಗಗ್ಗರ ಸೇವೆ ಮತ್ತು ರಾತ್ರಿ 11 ಗಂಟೆಗೆ ಮಹಾರಥೋತ್ಸವ ನೆರವೇರಲಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಜಾತ್ರಾ ಮಹೋತ್ಸವಕ್ಕೆ ಮೆರುಗು ನೀಡಲಿದ್ದು, ದಿನಾಂಕ 25ರಂದು ಗುರುವಾರ ರಾತ್ರಿ 8 ಗಂಟೆಗೆ ಮೋಕೆದ ಕಲಾವಿದೆರ್ ಅಭಿನಯಿಸುವ ಸುಟ್ಟು ಸೆಟ್ಯಾರು ವಿರಚಿತ ತುಳು ಹಾಸ್ಯಮಯ ನಾಟಕ “ಕಾಸ್ದ ಕಸರತ್ತ್” ದಿನಾಂಕ 26ರಂದು ರಾತ್ರಿ 9 ಗಂಟೆಗೆ ಉಮೇಶ್ ಮಿಜಾರ್ ಸಾರಥ್ಯದ ನವ ಕಲಾವಿದೆರ್ ಬೆದ್ರ ಅಭಿನಯದ ತುಳು ನಾಟಕ “ಆಕೆ ಪನೊಡಾತೆ” ದಿನಾಂಕ 27ರಂದು ರಾತ್ರಿ 7 ಗಂಟೆಗೆ ಡಾ. ನಯನ ಎ. ಭಟ್ ಗಂಗಾ ನಿಲಯ ಗೇರುಕಟ್ಟೆ ಮತ್ತು ತಂಡದವರಿಂದ ‘ನೃತ್ಯ ವೈಭವ’ ಮತ್ತು ರಾತ್ರಿ 7.30ಕ್ಕೆ ಕಲರ್ಸ್ ಕನ್ನಡ ವಾಹಿನಿಯ ಎದೆತುಂಬಿ ಹಾಡುವೆನು ಖ್ಯಾತಿಯ ಸಂದೇಶ್ ನೀರುಮಾರ್ಗ ಮತ್ತು ತಂಡದವರಿಂದ “ಸಂಗೀತ ಸಂಭ್ರಮ” ದಿನಾಂಕ 28ರಂದು ರಾತ್ರಿ 8 ಗಂಟೆಗೆ ಮಹಾವಿಷ್ಣು ಕಲಾ ತಂಡ ಕಣಿಯೂರು ಇವರಿಂದ ರವಿಶಂಕರ್ ಶಾಸ್ತ್ರೀ ಮಾಣಿಲ ವಿರಚಿತ ತುಳು ನಾಟಕ “ಬುಡ್ದು ಪಾಡೋಡ್ಚಿ” ದಿನಾಂಕ 29ರಂದು ರಾತ್ರಿ 8.30ಕ್ಕೆ ಗಂಟೆಗೆ ಊರ ಹವ್ಯಾಸಿ ಕಲಾವಿದರಿಂದ ರವಿಚಂದ್ರ ಬಿ. ಸಾಲ್ಯಾನ್ ವಿರಚಿತ ತುಳು ಸಾಮಾಜಿಕ ನಾಟಕ “ಅಣ್ಣಡ ತಾಂಟೊರ್ಚಿ” ದಿನಾಂಕ 30ರಂದು ರಾತ್ರಿ 7ಕ್ಕೆ “ಪಾಪಣ್ಣ ವಿಜಯ ಗುಣ ಸುಂದರಿ” ಎಂಬ ಪ್ರಸಂಗವನ್ನು ನಾಳ ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಮತ್ತು ಊರ ಹವ್ಯಾಸಿ ಕಲಾವಿದರು ಆಡಿ ತೋರಿಸಲಿದ್ದಾರೆ. ಹೀಗೆ ದಿನಂಪ್ರತಿ ಎಲ್ಲಾ ಕಾರ್ಯಕ್ರಮಗಳು ನೆರವೇರಲಿದೆ.

First Previous

Showing 3 of 3 pages

Next Last