Fri, Apr 25, 2025
ರತ್ನವರ್ಮ ಹೆಗ್ಗಡೆ ಪ್ರಶಸ್ತಿಗೆ ಅಪ್ರಕಟಿತ ನಾಟಕ ಕೃತಿ ಆಹ್ವಾನ
ಮಂಗಳೂರು: ತುಳುಕೂಟ ಕುಡ್ಲ ನಡೆಸುವ ರತ್ನವರ್ಮ ಹೆಗ್ಗಡೆ ಪ್ರಶಸ್ತಿಗೆ ಪ್ರÀಕಟಿತ ಸ್ವತಂತ್ರ ನಾಟಕ ಕೃತಿಗಳನ್ನು ಆಹ್ವಾನಿಸಲಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರು ಕೊಡಮಾಡುವ ರತ್ನವರ್ಮ ಹೆಗ್ಗಡೆ ಪ್ರಶಸ್ತಿಯನ್ನು ಕುಡ್ಲದ ತುಳುಕೂಟದ ಮೂಲಕ ಕಳೆದ 45 ವರ್ಷಗಳಿಂದ ಪ್ರದಾನಿಸಲಾಗುತ್ತದೆ. ಎ 4 ಹಾಳೆಯಲ್ಲಿ 60-70 ಪುಟಗಳೊಳಗೆ ಕೃತಿ ಇರಬೇಕು. ಹಾಳೆಯ ಒಂದೇ ಬದಿಯಲ್ಲಿ ಇರಬೇಕು. ನಾಟಕ ಸ್ವತಂತ್ರ ಕೃತಿಯಾಗಿರಬೇಕು. 2025ರ ಮಕರ ಸಂಕ್ರಾಂತಿಯವರೆಗೆ ಪ್ರದರ್ಶನಗೊಳ್ಳಬಾರದು. ಪೌರಾಣಿಕ/ಚಾರಿತ್ರಿಕ/ಸಾಮಾಜಿಕ/ ಹೀಗೆ ಯಾವ ಪ್ರಕಾರವೂ ಆಗುತ್ತದೆ. ಭಾಷಾಂತರಗೊಂಡ /ಆಧಾರಿತ ಕೃತಿ ನಿರಾಕರಿಸಲಾಗುವುದು. ಲೇಖಕರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯನ್ನು ಪ್ರತ್ಯೇಕ ಹಾಳೆಯಲ್ಲಿ ಬರೆದು ಲಗತ್ತಿಸಬೇಕು. ಸ್ವತಂತ್ರ ಕೃತಿಯೆಂದು ಸ್ವಯಂಘೋಷಿತ ಪ್ರಮಾಣಪತ್ರ ಇರಬೇಕು. ಹತ್ತು ಬಾರಿ ಪ್ರಶಸ್ತಿಯನ್ನು ಪಡೆದವರು ಸ್ಪರ್ಧೆಗೆ ಅನರ್ಹರಾಗುತ್ತಾರೆ. ನಾಟಕ ಕೃತಿಗಳನ್ನು ಜ.15ರೊಳಗೆ ಕಳುಹಿಸಬೇಕು. ಬಿಸು ಪರ್ಬದಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕೃತಿಗಳನ್ನು ವರ್ಕಾಡಿ ರವಿ ಅಲೆವೂರಾಯ, ಸರಯೂ ಮನೆ, ಅಂಚೆ: ಅಶೋಕ ನಗರ, ಕೋಡಿಕಲ್, ಮಂಗಳೂರು-06 ವಿಳಾಸಕ್ಕೆ ಕಳುಹಿಸಬೇಕು ಎಂದು ತುಳುಕೂಟದ ಅಧ್ಯಕ್ಷೆ ಹೇಮಾ ದಾಮೋದರ ನಿಸರ್ಗ ತಿಳಿಸಿದ್ದಾರೆ.