ಆಟಿಡೊಂಜಿ ಕೆಸರ್ದ ಕೂಟದ ಕಾರ್ಯಕ್ರಮ


Logo

Published Date: 31-Jul-2024 Link-Copied

ಕಾರ್ಕಳ ಸಾಂತ್ರಬೆಟ್ಟು ಗುತ್ತುಮನೆತನದ ಬಾಕಿಮಾರು ಗದ್ದೆಯಲ್ಲಿ ಭಾರತೀಯ ಜೈನ್ ಮಿಲನ್ ಕಾರ್ಕಳ, ಯುವ ಜೈನ್ ಮಿಲನ್ ಕಾರ್ಕಳ, ಸನ್ಮಿತ್ರ ಜೈನ್ ಅಸೋಸಿಯೇಷನ್ ಕಾರ್ಕಳ ಹಾಗೂ ಜಿನವಾಣಿ ಮಹಿಳಾ ಸಮಾಜ ಕಾರ್ಕಳ ಇವರುಗಳ ಜಂಟಿ ಆಶ್ರಯದಲ್ಲಿ ಆಟಿಡೊಂಜಿ ಕೆಸರ್ದ ಕೂಟ ಕಾರ್ಯಕ್ರಮವು ಜು.28ರಂದು ವಿವಿಧ ಆಟೋಟಗಳೊಂದಿಗೆ ವಿಜ್ರಂಭಣೆಯಿಂದ ನೆರವೇರಿತು. ಇದರ ಉದ್ಘಾಟನಾ ಸಮಾರಂಭವು ದಿ. ಶ್ರೀಮತಿ ಸುಮಿತ್ರಮ್ಮ ವೇದಿಕೆ ಸಾಂತ್ರಬೆಟ್ಟು ಇದರಲ್ಲಿ ಸುಬೆದಾರ್ ಅಜಿತ್ ಕುಮಾರ್ ಜೈನ್(ಮಾಜಿ ಭೂ ಸೇನಾ ಸೈನಿಕರು) ರೆಂಜಾಳ ಇವರು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು. ವಲಯ ಅಧ್ಯಕ್ಷರಾದ ಸುದರ್ಶನ್ ಕುಮಾರ್ ಬಂಟ್ವಾಳ, ನಿರ್ದೇಶಕರಾದ ಯುವರಾಜ ಬಲಿಪ, ವಲಯ ಉಪಕಾರ್ಯದರ್ಶಿ ಶಶಿಕಲಾ ಕೆ. ಹೆಗಡೆ ಹಾಗೂ ಸಾಂತ್ರಬೆಟ್ಟು ಮನೆತನದವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಹಾರೈಸಿದರು ಕಾರ್ಕಳ ಜೈನ್ ಮಿಲನ್ ಅದ್ಯಕ್ಷ ಅಶೋಕ HM ಅಧ್ಯಕ್ಷತೆ ವಹಿಸಿದ್ದರು ಹಾಗೂ ರೆಂಜಾಳ, ಬಜೆಗೋಳಿ, ಕೆರ್ವಾಶೆ, ಶಿರ್ಲಾಲ್, ಅಜೆಕಾರ್ ಜೈನ್ ಮಿಲನ್ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು. ಕಾರ್ಯಕ್ರಮದಲ್ಲಿ 350ಕ್ಕೂ ಹೆಚ್ಚು ಜನ ಭಾಗವಹಿಸಿ 180 ವೀರ, ವೀರಾಂಗನೇಯರು ವೀರ ಕುವರ ವೀರ ಕುವರಿಯವರು ಭಾಗವಹಿಸಿ ಬಹುಮಾನಗಳಿಸಿರುತ್ತಾರೆ.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img