ಸತ್ತೂರು, ಧಾರವಾಡ: ಎಸ್.ಡಿ.ಎಂ. ವಿಶ್ವವಿದ್ಯಾಲಯದ ಘಟಿಕೋತ್ಸವ


Logo

Published Date: 27-Mar-2024 Link-Copied

ಧಾರವಾಡದ ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ಘಟಿಕೋತ್ಸವವು ಮಾರ್ಚ್ 27ರಂದು ಡಾ. ಡಿ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಪ್ರೇಮಾ ಧನರಾಜ್, ಸ್ಥಾಪಕ ನಿರ್ದೇಶಕರು, ಅಗ್ನಿ ಸುರಕ್ಷಾ, ಬೆಂಗಳೂರು ಮತ್ತು ಎಸ್.ಡಿ.ಎಂ. ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮತ್ತಿತರ ಗಣ್ಯರು ಘಟಿಕೊತ್ಸವವನ್ನು ಉದ್ಘಾಟಿಸಿದರು. ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರು ವಿದ್ಯಾರ್ಥಿಗಳಿಗೆ ಆಶೀರ್ವದಿಸಿ, ಮಾತನಾಡುತ್ತಾ, ಸರಿಯಾದ ನಿರ್ಧಾರ ಮತ್ತು ಪರಿಶ್ರಮದಿಂದ ವೈದ್ಯರು ಉತ್ತುಂಗಕ್ಕೇರಬಹುದು, ಉತ್ತಮ ಆರೋಗ್ಯ ಮತ್ತು ನೆಮ್ಮದಿಗೆ ಸರಿಯಾದ ಜೀವನ ಶೈಲಿಯು ಕಾರಣ, ವಿದ್ಯಾರ್ಥಿಗಳು ಹೆತ್ತವರ ತ್ಯಾಗ ಮತ್ತು ಕನಸನ್ನು ನನಸಾಗಿಸುವಲ್ಲಿ ಕಾರ್ಯನಿರತರಾಗಬೇಕು, ಮಾನವೀಯತೆ ಮತ್ತು ವಿನಂಮೃತೆಯಿಂದ ವೈದ್ಯರು ರೋಗಿಯ ಸೇವೆ ಮಾಡಬೇಕು, ರೋಗಿಗಳಿಗೆ ವೈದ್ಯರ ಮೇಲೆ ವಿಶ್ವಾಸ ಮತ್ತು ಸಂತೋಷವಾಗಲು ಸದಾ ಅವರನ್ನು ವಿಚಾರಿಸುತ್ತಿರಬೇಕು. ಮುಖ್ಯ ಅತಿಥಿಗಳಾದ ಡಾ. ಪ್ರೇಮಾ ಧನರಾಜ್ ಅವರು ಘಟಿಕೋತ್ಸವವನ್ನು ಉದ್ದೇಶಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ಅಧ್ಯಯನದ ಕಡೆ ಗಮನ ಹರಿಸುತ್ತಾ ಸಮಸ್ಯೆಗಳನ್ನು ನಿಭಾಯಿಸಬೇಕು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ನೈತಿಕತೆಯ ಪ್ರಾಮುಖ್ಯತೆಯನ್ನು ಹೆತ್ತವರು ತಿಳಿಸಬೇಕು, ಮತ್ತೊಬ್ಬರನ್ನು ತುಲನೆ ಮಾಡಿಕೊಳ್ಳದೇ ನಾವು ಸದಾ ಖುಷಿ-ಸಂತೋಷದಿಂದಿರಬೇಕು. ಕಠಿಣ ಪರಿಶ್ರಮ, ನೈತಿಕತೆ, ಮಾನವೀಯತೆಯಿಂದ ಒಬ್ಬ ಪರಿಪೂರ್ಣ ವ್ಯಕ್ತಿ ಎನಿಸಬಹುದು. ಪ್ರತಿಯೊಬ್ಬರೂ ನಿಖರವಾದ ಗುರಿಯನ್ನು ಹೊಂದುವುದರೊಂದಿಗೆ ಗುರಿ ಮುಟ್ಟುವಂತೆ ಶ್ರಮಿಸಬೇಕು. ಜೀವನದಲ್ಲಿ ಏರಿಳಿತ ಸ್ವಾಭಾವಿಕವಾದುದರಿಂದ ಅದನ್ನು ಮೆಟ್ಟಿನಿಂತು ಪರಿಹರಿಸಬೇಕು. ಏಕಾಗ್ರತೆ, ಪ್ರೇರಣೆ, ಸೂಕ್ತ ನಿರ್ಣಯಗಳು ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತವೆ, ದಿನದಿಂದ ದಿನಕ್ಕೆ ಮೇಲುಗೈ ಸಾಧಿಸುತ್ತಾ ವಿಜಯಿಯಾಗಬೇಕು. ಈ ಘಟಿಕೋತ್ಸವದಲ್ಲಿ ಎಸ್.ಡಿ.ಎಂ. ಸಂಸ್ಥೆಗಳ ಉಪಾಧ್ಯಕ್ಷರಾದ ಡಿ. ಸುರೇಂದ್ರ ಕುಮಾರ, ಎಸ್.ಡಿ.ಎಂ. ವಿಶ್ವವಿದ್ಯಾಲಯದ ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ, ಡಾ. ನೈದಿಲ ಶೆಟ್ಟಿ, ಸಹ ಉಪ ಕುಲಪತಿಗಳಾದ ವಿ. ಜೀವಂಧರ ಕುಮಾರ, ಹಣಕಾಸು ಅಧಿಕಾರಿಗಳಾದ ವಿ. ಜಿ. ಪ್ರಭು, ಅಂಗ ಸಂಸ್ಥೆಗಳ ಮುಖ್ಯಸ್ಥರುಗಳು ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ 115 ಪದವಿಧರರು ಮತ್ತು 180 ಸ್ನಾತ್ತಕೋತ್ತರ ಪದವಿಧರರು ತಮ್ಮ ಪದವಿಗಳನ್ನು ಮುಖ್ಯ ಅತಿಥಿಗಳಿಂದ ಪಡೆದರು. 9 ಪ್ರತಿಭಾವಂತ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಚಿನ್ನದ ಪದಕವನ್ನು ಪಡೆದರು. ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ ಅವರು ಅತಿಥಿಗಳನ್ನು ಸ್ವಾಗತಿಸಿದರು. ಕುಲಸಚಿವರಾದ ಡಾ. ಚಿದೇಂದ್ರ ಶೆಟ್ಟರ ಅವರು ವಿಶ್ವವಿದ್ಯಾಲಯದ ವಾರ್ಷಿಕ ವರದಿ ಮಂಡಿಸಿದರು. ಡಾ. ಸುರೇಶ ಮನಗುತ್ತಿ ಮತ್ತು ಡಾ. ಅಂಕಿತಾ ಪಾಟೀಲ ಕಾರ್ಯಕ್ರವನ್ನು ನಿರೂಪಿಸಿದರು. ಉಪ ಕುಲಸಚಿವರಾದ ಡಾ. ಅಜಂತಾ ಜಿ.ಎಸ್. ಅವರು ವಂದನಾರ್ಪಣೆ ಸಲ್ಲಿಸಿದರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img