ಫೆ. 9, 10: ಮೂಡುಗಿಳಿಯಾರಿನಲ್ಲಿ ಅಭಿಮತ ಸಂಭ್ರಮ


Logo

Published Date: 09-Feb-2024 Link-Copied

ಕುಂದಾಪುರ ತಾಲೂಕಿನ ಮೂಡುಗಿಳಿಯಾರಿನಲ್ಲಿ ಜನಸೇವಾ ಟ್ರಸ್ಟ್ (ರಿ.) ಇವರ ವತಿಯಿಂದ ಅಲ್ಸೆಕೆರೆ ಶ್ರೀ ಮಹಾಲಿಂಗೇಶ್ವರ ಆವಾರದಲ್ಲಿ “ಅಭಿಮತ ಸಂಭ್ರಮ” ಕಾರ್ಯಕ್ರಮವು ಫೆ. 9 ಮತ್ತು 10ರಂದು ನಡೆಯಲಿದೆ. ಫೆ. 9ರಂದು ಜಿ.ಎಂ. ಸೋಮಯಾಜಿ ನೇತೃತ್ವದಲ್ಲಿ ಸಹಸ್ರ ನಾಳಿಕೇರ ಗಣಯಾಗ ಮತ್ತು ಶೃಂಗೇರಿ ಶ್ರೀ ಮಠ, ಶ್ರೀ ಸನ್ನಿಧಾನಂ ಜಗದ್ಗುರು ಶ್ರೀ ಶ್ರೀ ಶ್ರೀ ಶಂಕರಾಚಾರ್ಯ ಶ್ರೀ ಶ್ರೀ ವಿಧುಶೇಖರಭಾರತಿ ಮಹಾಸ್ವಾಮಿಗಳವರು ಧಾರ್ಮಿಕ ಸಂಭ್ರಮ ಕಾರ್ಯಕ್ರಮದಲ್ಲಿ ಅನುಗ್ರಹ ಸಂದೇಶ ನೀಡಲಿದ್ದಾರೆ. ಫೆ. 10ರಂದು ಸಂಜೆ 6.30ರಿಂದ ನಡೆಯುವ ಸಾಂಸ್ಕೃತಿಕ ಸಂಭ್ರಮದಲ್ಲಿ ಮಂಗಳೂರು ನಂದಗೋಕುಲ ಕಲಾವಿದರು ಪ್ರಸ್ತುತಪಡಿಸುವ "ಆನೆಗುಡ್ಡೆ ಆ ಶ್ರೀ ವಿನಾಯಕ", ಪಟ್ಲ-ಜನ್ಸಾಲೆ ಜೊತೆಗೆ ತೆಂಕು-ಬಡಗಿನ ಕಲಾವಿದರುಗಳಿಂದ "ಸ್ವರ ನೂಪುರ" ಮತ್ತು ಮಂಗಳೂರು ಜರ್ನಿ ಥೇಟರ್ ಗ್ರೂಪ್ ಪ್ರಸ್ತುತಪಡಿಸುವ "ಸಾವಿರದ ಹಾಡುಗಳು" ಹಾಗೂ ಮಂಗಳೂರು ಶ್ರೀ ಮೂಕಾಂಬಿಕಾ ಚೆಂಡೆ ಬಳಗ ಪ್ರಸ್ತುತ ಪಡಿಸುವ "ಡಿವೈನ್ ಬೀಟ್ಸ್" ಚೆಂಡೆ, ವಯಲಿನ್‌, ಕೊಳಲು, ಸ್ಯಾಕ್ಸೋಫೋನ್‌ ಜುಗಲ್ಬಂಧಿ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8ರಿಂದ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.)ದ ಅಧ್ಯಕ್ಷರಾದ ಡಾ.ಎಂ. ಮೋಹನ್ ಆಳ್ವರವರ ಅಧ್ಯಕ್ಷತೆಯಲ್ಲಿ, ಎಂ.ಆರ್.ಜಿ. ಸಮೂಹದ ಚೇರ್‌ಮನ್ ಕೆ. ಪ್ರಕಾಶ್ ಶೆಟ್ಟಿಯವರ ಉದ್ಘಾಟನೆಯೊಂದಿಗೆ ಗೌರವಾನ್ವಿತ ಅತಿಥಿಗಳ ಉಪಸ್ಥಿತಿಯಲ್ಲಿ ಖ್ಯಾತ ಯಕ್ಷಗಾನ ಭಾಗವತರಾದ ದಿ.ಜಿ.ಆರ್.‌ ಕಾಳಿಂಗ ನಾವಡ ಅವರಿಗೆ ಮರಣೋತ್ತರ ಕೀರ್ತಿ ಕಲಶ ಪ್ರದಾನ ಸಂಭ್ರಮ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಯಶೋಗಾಥೆ ಗೌರವಾದರ ಕಾರ್ಯಕ್ರಮ ಜರಗಲಿರುವುದು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img