Sat, May 3, 2025

Sat, May 3, 2025


ಚಿಕ್ಕಮಗಳೂರು : ಚಾರಣಕ್ಕೆ ಆನ್‌ಲೈನ್ ಬುಕ್ಕಿಂಗ್ ಕಡ್ಡಾಯ


Logo

Published Date: 05-Feb-2024

ಚಿಕ್ಕಮಗಳೂರು ಜಿಲ್ಲೆಯಲ್ಲಿ ಎತ್ತಿನಭುಜ, ರಾಣಿಝರಿ, ಕೆಮ್ಮಣ್ಣು ಗುಂಡಿ ಸಹಿತ ಅನೇಕ ಟ್ರೆಕ್ಕಿಂಗ್ ಸ್ಥಳಗಳಿದ್ದು, ಚಾರಣದಿಂದ ಇಲ್ಲಿನ ವನ್ಯಜೀವಿಗಳಿಗೆ ಕಿರಿಕಿರಿ ಉಂಟಾಗುವ ಕಾರಣಕ್ಕಾಗಿ ಕೆಲವು ನಿರ್ಬಂಧ ಕ್ರಮಗಳಿಗೆ ಸರಕಾರ ಮುಂದಾಗಿದೆ. ಸದ್ಯ ಜಿಲ್ಲೆಯಲ್ಲಿ ಟ್ರೆಕ್ಕಿಂಗ್ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ವನ್ಯ ಪ್ರಾಣಿಗಳಿಗೂ ಕಿರಿಕಿರಿ ತಪ್ಪಲಿದೆ ಜೊತೆಗೆ ಮಾಲಿನ್ಯಕ್ಕೂ ಕಡಿವಾಣ ಬೀಳಲಿದೆ ಎಂದು ನಿರೀಕ್ಷಿಸಲಾಗಿದೆ. ಜಿಲ್ಲೆಯಲ್ಲಿ ಅನೇಕ ಪ್ರವಾಸಿ ತಾಣಗಳ ಜತೆಗೆ ಚಾರಣ ಕೇಂದ್ರಗಳಿವೆ. ಚಾರಣ ತೆರಳುವವರಿಗೆ ಸರಕಾರ ಕೆಲವು ನಿಯಮಗಳನ್ನು ರೂಪಿಸಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯ ಚಾರಣ ಕೇಂದ್ರಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಚಾರಣಕ್ಕೆ ತೆರಳುವವರು ಆನ್ ಲೈನ್‌ನಲ್ಲಿ ನೋಂದಾಯಿಸಿದ ಬಳಿಕ ನಿರ್ದಿಷ್ಟ ಸಂಖ್ಯೆಯ ಜನರಿಗೆ ಮಾತ್ರವೇ ತೆರಳಲು ಅವಕಾಶ ನೀಡಲಾಗುವುದು ಎಂದು ಚಿಕ್ಕಮಗಳೂರು ಡಿಎಫ್‌ಒ ರಮೇಶ್‌ಬಾಬು ಮಾಹಿತಿ ನೀಡಿದ್ದಾರೆ.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img