ಮೈಸೂರು ಜ. 31: ಮೈಸೂರು ಮಹಾರಾಜರಿಗೆ ‘ಮಹಾಮಸ್ತಕಾಭಿಷೇಕ’ ಮತ್ತು ‘ಅಜಿಲದರ್ಶನ’ ಕಾವ್ಯ ಸಂಕಲನ ಬಿಡುಗಡೆಗೆ ಆಹ್ವಾನ
Published Date: 31-Jan-2024 Link-Copied
ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ಫೆ. 22ರಿಂದ ಮಾ. 1ರ ತನಕ ಜರಗಲಿರುವ ಭ| ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕಕ್ಕೆ ಮತ್ತು ಫೆ. 26ರಂದು ಅಳದಂಗಡಿ ಅರಮನೆಯಲ್ಲಿ ನಡೆಯಲಿರುವ ‘ಅಜಿಲ ದರ್ಶನ’ ಕಾವ್ಯಸಂಕಲನ ಬಿಡುಗಡೆ ಕಾರ್ಯಕ್ರಮಕ್ಕೆ ಮೈಸೂರಿನ ಮಹಾರಾಜರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಇಂದು (ಜ. 31) ಆಹ್ವಾನಿಸಲಾಯಿತು. ಈ ಸಂದರ್ಭದಲ್ಲಿ ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು, ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲ ದಂಪತಿಗಳು, ಶಿವಪ್ರಸಾದ್ ಅಜಿಲ ದಂಪತಿಗಳು ಮತ್ತು ಮೂಡಬಿದ್ರೆ ಎಕ್ಸಲೆಂಟ್ ಕಾಲೇಜಿನ ಅಧ್ಯಕ್ಷರಾದ ಯುವರಾಜ್ ಜೈನ್, ರಾಜೇಂದ್ರ ಕುಮಾರ್ ಮೂಲ್ಕಿ, ಪದ್ಮಕೀರ್ತಿ ಸೂರಾಲು ಅರಮನೆ ಹಾಗೂ ಗೌತಮ್ ಎಂ. ಜೈನ್ ಉಪಸ್ಥಿತರಿದ್ದರು.