ಮೈಸೂರು ಜ. 31: ಮೈಸೂರು ಮಹಾರಾಜರಿಗೆ ‘ಮಹಾಮಸ್ತಕಾಭಿಷೇಕ’ ಮತ್ತು ‘ಅಜಿಲದರ್ಶನ’ ಕಾವ್ಯ ಸಂಕಲನ ಬಿಡುಗಡೆಗೆ ಆಹ್ವಾನ


Logo

Published Date: 31-Jan-2024 Link-Copied

ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ಫೆ. 22ರಿಂದ ಮಾ. 1ರ ತನಕ ಜರಗಲಿರುವ ಭ| ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕಕ್ಕೆ ಮತ್ತು ಫೆ. 26ರಂದು ಅಳದಂಗಡಿ ಅರಮನೆಯಲ್ಲಿ ನಡೆಯಲಿರುವ ‘ಅಜಿಲ ದರ್ಶನ’ ಕಾವ್ಯಸಂಕಲನ ಬಿಡುಗಡೆ ಕಾರ್ಯಕ್ರಮಕ್ಕೆ ಮೈಸೂರಿನ ಮಹಾರಾಜರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರನ್ನು ಇಂದು (ಜ. 31) ಆಹ್ವಾನಿಸಲಾಯಿತು. ಈ ಸಂದರ್ಭದಲ್ಲಿ ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು, ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲ ದಂಪತಿಗಳು, ಶಿವಪ್ರಸಾದ್ ಅಜಿಲ ದಂಪತಿಗಳು ಮತ್ತು ಮೂಡಬಿದ್ರೆ ಎಕ್ಸಲೆಂಟ್ ಕಾಲೇಜಿನ ಅಧ್ಯಕ್ಷರಾದ ಯುವರಾಜ್ ಜೈನ್, ರಾಜೇಂದ್ರ ಕುಮಾರ್ ಮೂಲ್ಕಿ, ಪದ್ಮಕೀರ್ತಿ ಸೂರಾಲು ಅರಮನೆ ಹಾಗೂ ಗೌತಮ್ ಎಂ. ಜೈನ್ ಉಪಸ್ಥಿತರಿದ್ದರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img