ಬ್ಯೂರೋಕ್ರಾಟ್ಸ್ ಇಂಡಿಯಾ ಸಂಸ್ಥೆ ಗುರುತಿಸಿದ ಸಾಧಕ ಪಟ್ಟಿಗೆ ಪೊಲೀಸ್ ಕಮಿಷನರ್ ಕುಲದೀಪ್ ಆರ್. ಜೈನ್ ಆಯ್ಕೆ


Logo

Published Date: 30-Jan-2024 Link-Copied

ಬ್ಯೂರೋಕ್ರಾಟ್ಸ್ ಇಂಡಿಯಾ (ಭಾರತದ ಅಧಿಕಾರಶಾಹಿ) ಸಂಸ್ಥೆ ಗುರುತಿಸಿದ 'ಆಡಳಿತ ಶಾಹಿಗಳ ತಳಮಟ್ಟದ ಅವಿಷ್ಕಾರಗಳು ಮತ್ತು ಕಲ್ಯಾಣ ಕಾರ್ಯಕ್ರಮ'ದ ಸಾಧಕರ ಪಟ್ಟಿಗೆ ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ ಈ ಹಿಂದಿನ ಪೊಲೀಸ್ ಕಮಿಷನರ್ ಕುಲದೀಪ್ ಆರ್. ಜೈನ್ ಆಯ್ಕೆಯಾಗಿದ್ದಾರೆ. ಬ್ಯೂರೋಕ್ರಾಟ್ಸ್ ಇಂಡಿಯಾದಲ್ಲಿ ಐಎಎಸ್ ಮತ್ತು ಐಪಿಎಸ್ ಹುದ್ದೆಯಲ್ಲಿದ್ದು, ಸರಕಾರಿ ಕಾಯ೯ಕ್ರಮಗಳ ಪರಿಣಾಮಕಾರಿ ಅನುಷ್ಠಾನ, ಅಧಿಕಾರಿಶಾಹಿಗಳ ನಿರಂತರ ಪ್ರಯತ್ನಗಳನ್ನು ಪರಿಗಣಿಸಿ, ಈ ಪಟ್ಟಿಗೆ ಸಾಧಕರನ್ನು ಗುರುತಿಸಲಾಗುತ್ತದೆ. 2023ರ ಸಾಲಿನಲ್ಲಿ ದೇಶಾದ್ಯಂತ ಒಟ್ಟು 23 ಮಂದಿಯನ್ನು ಆಯ್ಕೆ ಮಾಡಲಾಗಿದ್ದು, ಕುಲದೀಪ್ ಆರ್. ಜೈನ್ ಕನಾ೯ಟಕದಿಂದ ಆಯ್ಕೆಯಾದ ಏಕೈಕ ಅಧಿಕಾರಿಯಾಗಿದ್ದಾರೆ. ಇವರು ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಭ್ರಷ್ಟಾಚಾರದ ವಿರುದ್ಧ ದೃಢ ನಿಲುವು ತೋರಿ ಕಾಯ೯ನಿವ೯ಹಿಸಿದ್ದರು. ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಕಠಿಣ ಕ್ರಮಗಳ ಮೂಲಕ ಸಾವ೯ಜನಿಕರ ಸುರಕ್ಷತೆಯನ್ನು ಹೆಚ್ಚಿಸುವತ್ತ ವಿಶೇಷ ಗಮನ ಹರಿಸಿದ್ದರು. ಕನಾ೯ಟಕ ಕೇಡರ್‌ನ 2011ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ ಇವರು ಪ್ರಸ್ತುತ ಬೆಂಗಳೂರು ಪೂವ೯ ವಿಭಾಗದ (ಟ್ರಾಫಿಕ್) ಡಿಸಿಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img