Mon, May 12, 2025
ಮೂಡುಬಿದಿರೆ, ಎಕ್ಸಲೆಂಟ್ : ಜ. 26-27 ಸ್ವಚ್ಛನಗರ ಮಿಷನ್-ಜಾಗೃತಿ ಅಭಿಯಾನ
ವೇಣೂರಿನ ಮಹಾಮಸ್ತಕಾಭಿಷೇಕದ ಶುಭ ಸಂದರ್ಭದಲ್ಲಿ ಗಣರಾಜ್ಯೋತ್ಸವದಂದು ‘ಸ್ವಚ್ಛ ನಗರ ಮಿಷನ್‘ ಎಂಬ ಸಂಕಲ್ಪದಡಿಯಲ್ಲಿ 2 ದಿನಗಳ ಸ್ವಚ್ಛತಾ ಜಾಗೃತಿ ಅಭಿಯಾನವನ್ನು ಮೂಡುಬಿದಿರೆ ಕಲ್ಲಬೆಟ್ಟುವಿನ ಎಕ್ಸಲೆಂಟ್ ವಿದ್ಯಾಸಂಸ್ಥೆ ಹಮ್ಮಿಕೊಂಡಿದೆ. ‘ಸ್ವಚ್ಚತಾ ಹೀ ಸೇವಾ‘ ಎಂಬ ಘೋಷವಾಕ್ಯದೊಂದಿಗೆ ಮೂಡುಬಿದಿರೆಯಿಂದ ವೇಣೂರು ತನಕ 2 ದಿನಗಳ ಸ್ವಚ್ಚತಾ ಜಾಗೃತಿ ಅಭಿಯಾನ ನಡೆಯಲಿದೆ. ಜನವರಿ 26ರಂದು ಬೆಳಗ್ಗೆ ಉದ್ಘಾಟನೆಗೊಂಡು ಜೈನ್ ಮಿಲನ್ ಮೂಡುಬಿದಿರೆ, ರೋಟರಿ ಕ್ಲಬ್ ಟೆಂಪಲ್ ಟೌನ್, ಲಯನ್ಸ್ ಕ್ಲಬ್, ಜೆ.ಸಿ.ಐ. ಮೂಡುಬಿದಿರೆ ಹಾಗೂ ಪತ್ರಕರ್ತರ ಸಂಘ ಮೂಡುಬಿದಿರೆ, ಶ್ರೀ ಧರ್ಮಸ್ಥಳ ಅನುದಾನಿತ ಶಾಲೆ ಪೆರಿಂಜೆ, ನವಚೇತನ ಶಿಕ್ಷಣ ಸಂಸ್ಥೆ ವೇಣೂರು, ಸಂತ ಜೂಡರ ಶಾಲೆ ಕರಿಮಣೇಲು ಇವರ ಸಹಯೋಗದೊಂದಿಗೆ ಈ ಅಭಿಯಾನ ಪ್ರಾರಂಭಗೊಂಡು, ಜನವರಿ 27ರಂದು ಮುಕ್ತಾಯಗೊಳ್ಳಲಿದೆ.