ಆನೆಕೆರೆ ಚತುರ್ಮುಖ ಕೆರೆ ಬಸದಿ ಪಂಚಕಲ್ಯಾಣ ಮಹೋತ್ಸವವು ಇಂದಿನಿಂದ ಆರಂಭ


Logo

Published Date: 18-Jan-2024 Link-Copied

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಐತಿಹಾಸಿಕ ಆನೆಕೆರೆ ಚತುರ್ಮುಖ ಕೆರೆ ಬಸದಿಯ ಪಂಚಕಲ್ಯಾಣ ಮಹೋತ್ಸವವು ಇಂದಿನಿಂದ ಪ್ರಾರಂಭಗೊಂಡು ಜ. 22ರ ವರೆಗೆ ನಡೆಯಲಿದೆ. ಸುಮಾರು 5 ಶತಮಾನಗಳಷ್ಟು ಪ್ರಾಚೀನ ಆನೆಕೆರೆ ಬಸದಿ ಐವರು ತೀರ್ಥಂಕರರ ಭವ್ಯ ಬಿಂಬಗಳಿಂದ ಕೂಡಿದೆ. ಚತುರ್ಮುಖ ಬಸದಿಯ ವಾಸ್ತು ಶೈಲಿಯನ್ನು ಹೊಂದಿರುವ ಕೆರೆ ಬಸದಿಯನ್ನು ಭೈರವರಸರ ವಂಶಸ್ಥ ಪಾಂಡ್ಯನಾಥ ಪಾಂಡ್ಯಪ್ಪೊಡೆಯ 16.05.1545ರಲ್ಲಿ ಕಟ್ಟಿಸಿದರು ಎಂದು ಇತಿಹಾಸ ಹೇಳುತ್ತದೆ. 2022ರಲ್ಲಿ ಜೀರ್ಣೋದ್ಧಾರ ಕಾರ್ಯವನ್ನು ಆರಂಭಿಸಿದ್ದು, ಸುಮಾರು 26 ಎಕರೆ ವಿಸ್ತೀರ್ಣದಲ್ಲಿ ಆನೆಕೆರೆ ಬಸದಿಯು ಶೋಭಿಸುತ್ತಿದೆ. ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ಶ್ರೀ ಜೈನಮಠ, ದಾನಶಾಲಾ ಕಾರ್ಕಳ ಇವರ ನೇತೃತ್ವದಲ್ಲಿ ಮತ್ತು ಸಮಸ್ತ ಭಟ್ಟಾರಕರ ಪಾವನ ಸಾನಿಧ್ಯದಲ್ಲಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಶ್ರೀಮತಿ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಮತ್ತು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಡಾ.ಎಂ.ಎನ್. ರಾಜೇಂದ್ರ ಕುಮಾರ್ ರವರ ಸಹಕಾರದೊಂದಿಗೆ ಶ್ರೀ ಪಾರ್ಶ್ವನಾಥ ಸ್ವಾಮಿಗೆ ಪಂಚಕಲ್ಯಾಣ ಮಹೋತ್ಸವವು ನೂತನ ಶಿಲಾಮಂದಿರಲ್ಲಿ ಆಗಮೋಕ್ತ ವಿಧಿ- ವಿಧಾನಗಳೊಂದಿಗೆ ಸಂಪನ್ನಗೊಳ್ಳಲಿದೆ. ನೂತನ ಆನೆಕೆರೆ ಬಸದಿಯು ಸುಂದರವಾದ ಕೆತ್ತನೆಯಲ್ಲಿ ಶಿಲಾಮಯವಾಗಿ ರೂಪುಗೊಂಡ ದ್ವಾರಪಾಲಕರು, ತಿರುಗಿಸಬಹುದಾದಂತಹ ಕಂಬಗಳು, ಪಾಣಿಪೀಠದ ಬುಡದಲ್ಲಿ ಸೂಕ್ಷ್ಮವಾದ ಕೆತ್ತನೆಗಳು, ಶಾಶ್ವತ ವಿದ್ಯುತ್ ದೀಪಾಲಂಕಾರ ಹೀಗೆ ಅನೇಕ ವಿಶೇಷತೆಗಳೊಂದಿಗೆ ಲೋಕಾರ್ಪಣೆಗೆ ಸಿದ್ದವಾಗಿದೆ.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img