Sat, Apr 26, 2025
ಎಸ್.ಡಿ.ಎಂ. ವಿಶ್ವವಿದ್ಯಾಲಯ ಮತ್ತು ಐಐಐಟಿ, ಧಾರವಾಡ ಒಡಂಬಡಿಕೆಗೆ ಸಹಿ
ಧಾರವಾಡದ ಸತ್ತೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯವು ಮಾರ್ಚ 11, 2025ರಂದು ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (IIIT), ಇಟಿಗಟ್ಟಿ ಧಾರವಾಡದೊಂದಿಗೆ ಒಡಂಬಡಿಕೆಗೆ ಸಹಿ ಮಾಡಲಾಯಿತು. ಈ ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ಎಸ್.ಡಿ.ಎಂ. ವಿಶ್ವವಿದ್ಯಾಲಯ ಮತ್ತು ಐಐಐಟಿ ಧಾರವಾಡದ ಅಧ್ಯಾಪಕರು ಮತ್ತು ಸಂಶೋಧಕರು ಶೈಕ್ಷಣಿಕ ಉನ್ನತೀಕರಣ, ಸಂಶೋಧನಾ ಸಹಯೋಗ ಮತ್ತು ಮಾಹಿತಿ ತಂತ್ರಜ್ಞಾನದ ಜೊತೆಗೆ ಆರೋಗ್ಯ ವಿಜ್ಞಾನದ ಏಕೀಕರಣ ಮತ್ತು ಇನ್ನೂ ಹಲವು ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡುವುದು ಈ ಒಡಂಬಡಿಕೆಯ ಮುಖ್ಯ ಉದ್ದೇಶವಾಗಿದೆ. ಧಾರವಾಡದ ಎರಡು ಪ್ರತಿಷ್ಠತ ಸಂಸ್ಥೆಗಳ ಸಂಶೋಧನಾ ಸಹಯೋಗ ಮತ್ತು ನಾವೀನ್ಯತೆಗಾಗಿ ಒಟ್ಟಿಗೆ ಸೇರಿರುವುದು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಧಾರವಾಡದ ಐಐಐಟಿಯನ್ನು ನಿರ್ದೇಶಕರಾದ ಡಾ. ಮಹಾದೇವ ಪ್ರಸನ್ನ, ಕುಲಸಚಿವರಾದ ಡಾ. ರವಿ ಬಿ. ವಿಟ್ಲಾಪುರ, ಡಾ. ಮಂಜುನಾಥ ಕೆ ವನಹಳ್ಳಿ, ಡಾ. ಕೆ. ಗೋಪಿನಾಥ ಮತ್ತು ಇತರ ಹಿರಿಯ ಅಧ್ಯಾಪಕರು ಮತ್ತು ಸಂಶೋಧಕರು ಪ್ರತಿನಿಧಿಸಿದರು. ಎಸ್.ಡಿ.ಎಂ. ವಿಶ್ವವಿದ್ಯಾಲಯ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ, ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ, ಸಹ ಉಪಕುಲಪತಿಗಳಾದ ವಿ. ಜೀವಂಧರ್ ಕುಮಾರ, ಕುಲಸಚಿವರಾದ ಡಾ. ಚಿದೇಂದ್ರ ಎಂ. ಶೆಟ್ಟರ್, ಹಣಕಾಸು ಅಧಿಕಾರಿಗಳಾದ ವಿ.ಜಿ ಪ್ರಭು, ಸಂಶೋಧನಾ ನಿರ್ದೇಶಕರಾದ ಡಾ. ಕೆ ಸತ್ಯಮೂರ್ತಿ, ಉಪ ಕುಲಸಚಿವರಾದ ಡಾ. ಅಜಂತ ಜಿ. ಎಸ್., ಎಸ್.ಡಿ.ಎಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ. ರತ್ನಮಾಲಾ ಎಂ. ದೇಸಾಯಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.